ಜೈ
ಬಿನಾಯಕ್ ಸೇನ್ ತೀರ್ಪಿಗೆ ಜೈ!
ನಮ್ಮ ದೇಶವನ್ನು ರಕ್ಷಿಸಲಾಗಿದೆ
ಆತನಿಗೆ ಜೀವಾವಧಿ ಶಿಕ್ಷೆಯನ್ನು ನೀಡುವ ಮೂಲಕ.
ವೀರಚರಿತ್ರೆಗಳ ಈ ಪುರಾತನ ಪುಣ್ಯ ಭೂಮಿಯಲ್ಲಿ
ಬದುಕಿದ್ದ ಆ ಪಾತಕಿಗೆ
ಮರಣದಂಡನೆಯನ್ನೇ ನೀಡಬೇಕಿತ್ತು
ಇದು
ಹರಿಶ್ಚಂದ್ರರ ತಾಯಿನಾಡು,
ಭ್ರಷ್ಟಾಚಾರರಹಿತ ಭೂಮಿ,
ಬಡತನವೆಂಬುದೇ ಇರದ ದೇಶ,
ಅಣ್ಣ-ಅಕ್ಕಂದಿರ ವಿಶಿಷ್ಟ ರಾಷ್ಟ್ರ,
ಅಪಾರ ಸ್ವಾತಂತ್ರ್ಯಗಳಿರುವ ದೇವಗಿರಿ,
ಜಾತಿ/ಧರ್ಮ ಎಂಬ ಭೇದಭಾವಗಳಿರದ ಪವಿತ್ರ ಭೂಮಿ....
ಇಂತಹ ದೇಶವನ್ನು ಛಿದ್ರಗೊಳಿಸಲು
ಆತ ಸಂಚು ಹೂಡಿದ್ದ....
ಅಂಥವನಿಗೆ ಜೀವಾವಧಿ ಶಿಕ್ಷೆ
ನೀಡಿರುವ ನಮ್ಮ
ಪ್ರಜಾಪ್ರಭುತ್ವ ಮತ್ತು ನ್ಯಾಯಾಲಯಕ್ಕೆ
ಜೈ!
ಇಂಗ್ಲಿಷ್ ಮೂಲ: ಸಾಬು ಶಣ್ಮುಗಂ
ಕನ್ನಡಕ್ಕೆ: ಸಾವಂತ್ರಿ
ಪ್ರಿತಿಯ ಗೌರಿಯವರೇ,
ReplyDeleteಕುಳಿತಲ್ಲಿಂದಲೇ ಲೋಕದ ನಿಜ ಕಾಣುವಂತಾಯಿತು.
ನಿಮ್ಮ ಅಪ್ಪ ಇರುತ್ತಿದ್ದರೆ ಸಂತಸಪಡುತ್ತಿದ್ದರು.
-ಬೊಳುವಾರು